28 APRIL 2024

ಹುಬ್ಬಳ್ಳಿಯ ನವನಗರದಲ್ಲಿ ಇಂದು ಯುವ ಬ್ರಿಗೇಡ್ ಆಯೋಜಿಸಿದ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಮಾತುಗಳನ್ನು ಆಲಿಸಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದೆನು.

ಪ್ರಧಾನ ಮಂತ್ರಿ ಶ್ರೀ Narendra Modi ಅವರ 10 ವರ್ಷಗಳ ಆಡಳಿತದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು. 2014ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಹದಗೆಟ್ಟಿದ್ದ ಭಾರತದ ಆರ್ಥಿಕತೆ ಕೇವಲ 9 ವರ್ಷಗಳಲ್ಲಿ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡಿದರು. ಇನ್ನು ಕೆಲವೇ ವರ್ಷಗಳಲ್ಲಿ ಭಾರತವನ್ನು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದಾಗಿ ಸಂಕಲ್ಪವೂ ಮಾಡಿದ್ದಾರೆ. ಇದರೊಂದಿಗೆ ಒಂದು ವಿಶೇಷ ಸಂಕಲ್ಪವನ್ನು ಮಾಡಿದ್ದಾರೆ. ಅದೇನೆಂದರೆ, ಭಾರತದಿಂದ ಬಡತನವನ್ನು ನಿರ್ಮೂಲನೆ ಮಾಡುವುದು. ಹೇಳಿದ್ದನ್ನು ಮಾಡಿ ಸಾಧಿಸುವುದು ಶ್ರೀ ನರೇಂದ್ರ ಮೋದಿಯವರ ಗುಣ. ದೇಶದ ಹಿತ ಕಾಯುವ ಅವರ ಈ ಸಂಕಲ್ಪವನ್ನು ನಾವೆಲ್ಲರೂ ಸಾಕಾರಗೊಳಿಸಲು ಸಹಾಯ ಮಾಡೋಣ, ಬಿಜೆಪಿಯನ್ನು ಮತ್ತೆ ಬಹುಮತದಿಂದ ಗೆಲ್ಲಿಸೋಣ ಎಂದು ಇಂದಿನ ಸಮಾವೇಶದಲ್ಲಿ ಎಲ್ಲರೂ ಉತ್ಸಾಹದಿಂದ ಸಂಕಲ್ಪ ಮಾಡಿದರು.

ಇಂದಿನ ಸಮಾವೇಶದಲ್ಲಿ ವಾಗ್ಮಿ ಶ್ರೀ Chakravarty Sulibele , ಶಾಸಕರಾದ ಶ್ರೀ Arvind Bellad , ಕಾರ್ಪೊರೇಟರ್ ಶ್ರೀಮತಿ ಸುನಿತಾ ಮಲವಾಡೆ, ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ್ ವರ್ಕೇರಿ, ಶ್ರೀ ಮಹಾಜನ ಶೆಟ್ಟರ್, ಶ್ರೀ ಚಂದ್ರಶೇಖರ ಮನಗುಂಡಿ, ಶ್ರೀ ಎನ್ ಎಚ್ ಕುಲಕರ್ಣಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: