Tel: +91 0836 2251055
“ಉರಿಬಿಸಿಲಲ್ಲೂ ಘರ್ಜಿಸಿದ ಕೇಸರಿ ಪಡೆ”
ಇಂದು ಧಾರವಾಡ ವಿಧಾನಸಭಾ ಕ್ಷೇತ್ರದ ಪುಡಕಲಕಟ್ಟಿ ಮತ್ತು ಉಪ್ಪಿನ ಬೆಟಗೇರಿ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದೆನು. ಪ್ರಧಾನಮಂತ್ರಿ ಶ್ರೀ Narendra Modi ಅವರು ತಂದ ಆರ್ಥಿಕ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಬಲವಾದ ರಾಷ್ಟ್ರೀಯ ಭದ್ರತಾ ಕ್ರಮಗಳು ಮೋದಿಯವರ ಗ್ಯಾರಂಟಿಯ ಟ್ರ್ಯಾಕ್ ರೆಕಾರ್ಡ್ ಆಗಿದೆ. ಹೇಳಿದ್ದನ್ನು ಮಾಡುವ ಹಾಗು ಹೇಳದಿದ್ದನ್ನೂ ಮಾಡಿತೋರಿಸುವುದು ಮೋದಿಯವರ ಗ್ಯಾರಂಟಿಗಳು. ಇಂತಹ ಸಾಧನೆಗಳು ಮುಂದುವರಿಯಬೇಕು, ಅದಕ್ಕಾಗಿ ನಾವು ಬಿಜೆಪಿಯಿಂದ ಬಹುಮತದಿಂದ ಗೆಲ್ಲಿಸಬೇಕು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ರುದ್ರಪ್ಪ ಅರಿವಾಳ, ಪ್ರಮುಖರಾದ ಶ್ರೀ ನಿಜ್ಜನಗೌಡ ಪಾಟೀಲ್, ಶ್ರೀಮತಿ ಸವಿತಾ ಅಮರ್ ಶೆಟ್ಟಿ, ಶ್ರೀ ಗಂಗಾಧರ್ ಪಾಟೀಲ್ ಕುಲಕರ್ಣಿ ಹಾಗು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖರು ಮುಖಂಡರು ಶಾಸಕರು ಉಪಸ್ಥಿತರಿದ್ದರು.