Tel: +91 0836 2251055
29 APRIL 2024
ಇಂದು ಗರಗದ ಶ್ರೀ ಗುರು ಮಡಿವಾಳೇಶ್ವರ ಕಲ್ಮಠದ ಗದ್ದುಗೆಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ಕೋಟೂರ ಮತ್ತು ಬೇಲೂರ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ಬಿಜೆಪಿ ಪಕ್ಷ ಸದಾ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರವೇ ದುಡಿಯುವ ಪಕ್ಷ. ಇದಕ್ಕೆ ಸಾಕ್ಷಿ ಕಳೆದ 10 ವರ್ಷದಲ್ಲಿ ಭಾರತ ಕಂಡ ಅಭೂತಪೂರ್ವ ಬದಲಾವಣೆ. ಬೆಳವಣಿಗೆ ಎಂಬುದು ನವ ಭಾರತದ ಚಿಹ್ನೆ. ಹೀಗಾಗಿ ಈ ವೇಗ ಹೀಗೆಯೇ ಮುಂದುವರಿಯಬೇಕಾದರೆ, ಭಾರತ ವಿಶ್ವದ ಹಿರಿಯಣ್ಣನಾಗಿ ಪ್ರಪಂಚವನ್ನು ಮುನ್ನಡೆಸಬೇಕಾದರೆ Narendra Modi ಅವರ ನಾಯಕತ್ವವೇ ಸೂಕ್ತವಾದುದು. ಹೀಗಾಗಿ ಬಿಜೆಪಿ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ನಮ್ಮ ದೃಢ ಸಂಕಲ್ಪವಾಗಬೇಕು.
ಇಂದಿನ ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಮಡಿವಾಳೇಶ್ವರ ಕಲ್ಮಠದ ಕಾರ್ಯಧ್ಯಕ್ಷರಾದ ಶ್ರೀ ಅಶೋಕ್ ದೇಸಾಯಿ, ಶ್ರೀಮತಿ ಸವಿತಾ ಅಮರಶೆಟ್ಟಿ, ಶ್ರೀ ನಿಜನಗೌಡ್ರ, ಶ್ರೀ ಗುರುನಾಥಗೌಡ ಗೌಡರ, ಶ್ರೀ ಶಂಕರ ಮುಗದ, ಶ್ರೀ ನರಸಿಂಗನವರ್, ಶ್ರೀ ಸುನೀಲ್ ಗುಡಿ, ಪಕ್ಷದ ಪ್ರಮುಖರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.