Tel: +91 0836 2251055
5 APRIL 2024
“ನಿಗದಿಯಲ್ಲಿ ಝೇಂಕರಿಸಿದ ಮೋದಿ ಮತ್ತೊಮ್ಮೆ ಜಯಘೋಷ”
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಲಘಟಗಿ ಮತಕ್ಷೇತ್ರದ ನಿಗದಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ದೇಶದ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ಶ್ರೀ Narendra Modi ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮಾಡಿರುವ ಜನತೆ, ಕಳೆದ ಹತ್ತು ವರ್ಷದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿಪರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸುವ ಭರವಸೆ ನೀಡಿದರು.
ಕಲಘಟಗಿ – ಅಳ್ನಾವರ ಮತಕ್ಷೇತ್ರದ ಜನರ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಕೃತಜ್ಞನಾಗಿರುತ್ತೇನೆ.
ಇಂದಿನ ಸಭೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ Nagaraj Chebbi , ಮಂಡಲ ಅಧ್ಯಕ್ಷರಾದ ಶ್ರೀ ಕಲ್ಮೇಶ ಬೇಲೂರು, ಪಕ್ಷದ ಪ್ರಮುಖರಾದ ಶ್ರೀ ಈರಣ್ಣ ಜಡಿ, ಶ್ರೀ ಬಸವರಾಜ ಗುಂಡಗೋವಿ, ಶ್ರೀ ಶಂಕರ ಬಸವರೆಡ್ಡಿ, ಶ್ರೀ ಕಲ್ಮೇಶ ಹಾವೇರಿಪೇಟ, ಶ್ರೀ ಐ.ಸಿ.ಗೋಕುಲ, ಶ್ರೀ ಕಲ್ಲಪ್ಪ ಹಳಿಯಾಳ, ಶ್ರೀ ಫಕೀರಪ್ಪ ಬುಡ್ಡಿಕಾಯಿ, ಶ್ರೀ ಹನುಮಂತಪ್ಪ ಹಾಗೂ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.