Tel: +91 0836 2251055
17 APRIL 2024
ಹಳೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಭೆ ನಡೆಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಇಂದಿನ ಸಭೆಯಲ್ಲಿ ನನ್ನ ಬೆಂಬಲಕ್ಕಾಗಿ ನನ್ನ ಪರವಾಗಿ ಪ್ರಚಾರ ಮಾಡಲು ಚಿತ್ರನಟಿ ಹಾಗೂ ಬಿಜೆಪಿ ಪಕ್ಷದ ನಾಯಕಿಯಾದ ಶ್ರೀಮತಿ ತಾರಾ ಅವರು ಪ್ರಚಾರ ಸಭೆಯಲ್ಲಿ ಭಾಗವಹಿಸಿದರು.
ಈ ಬಾರಿ ಮೇ 7 ನೇ ತಾರೀಖು ಈ ದೇಶ ಕಟ್ಟುವಂತಹ ಕೆಲಸ ಆಗುತ್ತೆ. 500 ವರ್ಷದಿಂದ ನಾವೆಲ್ಲಾ ಜಪ ಮಾಡಿದ್ರೂ ಯಾರೊಬ್ಬರೂ ಕಿವಿಗೊಡಲಿಲ್ಲ. ರಾಮ ಮಂದಿರ ನನಸಾಗಿದ್ದು ಶ್ರೀ Narendra Modi ಅವರ ಶ್ರಮದಿಂದ. ಪ್ರತಿಯೊಬ್ಬ ಭಾರತೀಯನೂ ನನ್ನ ಪರಿವಾರ ಎಂದು ಕರೆದ ಏಕೈಕ ವ್ಯಕ್ತಿ, ಅದು ಮೋದಿಯವರು. ಸರ್ವರಿಗೂ ಸಮ ಪಾಲು ಸಮ ಬಾಳು ಎಂಬ ಸಂಕಲ್ಪ ಮಾಡಿ ಕಡು ಬಡವರಿಗೂ ಗೌರವದ ಬಾಳು ಕಲ್ಪಿಸಿಕೊಡಲು ಶ್ರಮಿಸುತ್ತಿರುವ ಏಕೈಕ ವ್ಯಕ್ತಿ, ಅದು ಮೋದಿಯವರು. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ನಾವೆಲ್ಲರೂ ಸಂಕಲ್ಪ ಮಾಡಿ ಶ್ರಮಿಸಬೇಕಿದೆ ಎಂದು ಕ್ಷೇತ್ರದ ಜನತೆಗೆ ಹುರಿದುಂಬಿಸಿ ನನ್ನ ಪರವಾಗಿ ಸೋದರಿ, ಶ್ರೀಮತಿ ತಾರಾ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಡಾ.ಕ್ರಾಂತಿಕಿರಣ್, ಶ್ರೀ ಪ್ರಭು ನವಲಗುಂದಮಠ, ಶ್ರೀ ಶಿವು ಮೆಣಸಿನಕಾಯಿ, ಹಿರಿಯರಾದ ಶ್ರೀ ರಂಗ ಬದ್ದಿ, ಶ್ರೀ ಶಿವಾನಂದಪ್ಪ, ಶ್ರೀ ಅರುಣ್ ಲೋಖರಿ, ಶ್ರೀ ರಾಮಚಂದ್ರ ಕಲಾಲ್ ಹಾಗೂ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.