Tel: +91 0836 2251055
16 APRIL 2024
ಬಿಜೆಪಿಯ ರಾಜ್ಯ ಕಾನೂನು ಪ್ರಕೋಷ್ಠದ ಪ್ರಮುಖರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ಭಾರತ ಸ್ವತಂತ್ರ್ಯಾ ನಂತರದ ದಿನಗಳಲ್ಲಿ ಪಾಲಿಸಿಕೊಂಡು ಬಂದಿದ್ದ ಬ್ರಿಟಿಷ್ ದಂಡ ಸಂಹಿತೆಗಳಿಗೆ ವಿರಾಮವಿಟ್ಟು ಮೋದಿ ಸರ್ಕಾರ ಭಾರತೀಯ ನ್ಯಾಯ ಸಂಹಿತೆಯನ್ನು ಭಾರತೀಯರಿಗಾಗಿ ಕಳೆದ ಚಳಿಗಾಲದ ಅಧಿವೇಶದಲ್ಲಿ ಜಾರಿಗೆ ತಂದಿದೆ. ಇದು ದಾಸ್ಯದ ಕಾನೂನುಗಳಿಂದ ಮುಕ್ತಿ ನೀಡಿ ಭಾರತೀಯತೆಗೆ ಒತ್ತು ನೀಡುತ್ತದೆ ಹಾಗೂ ದೇಶ ವಿರೋಧಿ ಚಟುವಟಿಕೆಗಳಿಗೆ ಸಿಂಹಸ್ವಪ್ನವಾಗಲಿದೆ. ಭಾರತ ಹೀಗೆ ತನ್ನ ಬಲಾದವಣೆಯ ಪರ್ವವನ್ನು ಮುಂದುವರಿಸಬೇಕಾದಲ್ಲಿ ಬಿಜೆಪಿಯನ್ನು ಗೆಲ್ಲಿಸಿ Narendra Modiಅವರನ್ನು ನಾವು ಮತ್ತೊಮ್ಮೆ ದೇಶದ ಪ್ರಧಾನಿಯಾಗುಸುವ ಸಂಕಲ್ಪವನ್ನು ಮಾಡಬೇಕು ಎಂದು ನೆರೆದಿದ್ದ ಎಲ್ಲ ವಕೀಲ ಮಿತ್ರರಲ್ಲಿ ಆಗ್ರಹಿಸಿದೆ.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಸುರೇಶ್ ಕುಮಾರ್, ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಮ್ ಎಸ್ ಬಾಣದ, ರಾಜ್ಯ ಕಾನೂನು ಪ್ರಕೋಷ್ಠಕ ಸಂಚಾಲಕರಾದ ಶ್ರೀ ವಸಂತ್ ಕುಮಾರ್, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಶ್ರೀ ಎಸ್ ಎಸ್ ವಿಠಲಕೂಡ, ವಿಶ್ವ ಹಿಂದೂ ಪರಿಷತ್ ಪ್ರಾಂತ ವಿಧಿ ಪ್ರಮುಖರಾದ ಶ್ರೀ ಅಶೋಕ್ ಅಣವೇಕರ, ಪ್ರಮುಖರಾದ ಶ್ರೀ ಸಂಜೀವ ಬಡಸ್ಕರ, ಶ್ರೀ ವಿಠಲ ನಾಯಕ, ಶ್ರೀಮತಿ ಮಂಜುಳಾ ಪಡೆಸೂರ, ಶ್ರೀಮತಿ ಪೂಜಾ ಸವದತ್ತಿ, ಶ್ರೀ ಎಸ್ ಸಿ ಈಳಗೇರಿ, ಶ್ರೀ ಯು ಎಂ ಪಾಟೀಲ, ಶ್ರೀ ಹೆಬ್ಬಳ್ಳಿ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಕಾನೂನು ಪ್ರಕೋಷ್ಠದ ಸದಸ್ಯರು ಪ್ರಮುಖರು ಉಪಸ್ಥಿತರಿದ್ದರು.