Tel: +91 0836 2251055
4 APRIL 2024
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಹುರಳಿಕುಪ್ಪಿಯಲ್ಲಿ ನಡೆದ ಹುರಳಿಕುಪ್ಪಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಕಳೆದ ಆರು ದಶಕದಲ್ಲಿ ಆಗಿರದ ಸಾಧನೆಯನ್ನು ಒಂದೇ ದಶಕದಲ್ಲಿ ಮಾಡಿ ತೋರಿಸಿದೆ. ಸರ್ವ ವರ್ಗಗಳನ್ನು ಒಳಗೊಂಡ ಸರ್ವತೋಮುಖ ಬೆಳವಣಿಗೆ ಮೋದಿ ಸರ್ಕಾರದ ಮೂಲ ಮಂತ್ರವಾಗಿದೆ. ಈ ಬೆಳವಣಿಗೆ ಹೀಗೆ ಸಾಗಬೇಕೆಂದೂ, ಮೂರನೇ ಬಾರಿಯೂ ಬಿಜೆಪಿ ಬಹುಮತದಿಂದ ಗೆದ್ದು ಮೋದಿ ನಾಯಕತ್ವ ಮುಂದುವರಿಯಬೇಕೆಂದು ಸಂಕಲ್ಪ ಮಾಡಿದ ಕಾರ್ಯಕರ್ತರು ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದರು.
ಇಂದಿನ ಸಮಾವೇಶದಲ್ಲಿ ಶ್ರೀ ಸುಭಾಸ ಗಡೆಪ್ಪನವರ, ಶ್ರೀ ಹನುಮಂತಗೌಡ ಮುದಿಗೌಡ್ರ, ಶ್ರೀಮತಿ ಶೋಭಾ ನಿಸ್ಸೀಮಗೌಡ್ರ, ಶ್ರೀ ಶಿವಪುತ್ರಪ್ಪ ಶಲಕೋಟಿ, ಶ್ರೀ ರುದ್ರಗೌಡ್ರ ಪಾಟೀಲ, ಶ್ರೀ ಗಾಳಪ್ಪ ದೊಡ್ಡಪೂಜಾರ, ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಗಂಗಾಧರ ಬಾಣದ, ಶ್ರೀ ಶ್ರೀಕಾಂತ ದುಂಡಿಗೌಡ್ರ, ಜೆಡಿಎಸ್ ತಾಲೂಕಾಧ್ಯಕ್ಷರಾದ ಶ್ರೀ ಎಂ ಎಸ್ ಹಣಗಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.