Tel: +91 0836 2251055
16 APRIL 2024
ಇಂದು ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಸವಿತಾ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ಕಳೆದ ದಶಕದಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿಯನ್ನು ಸಾಧಿಸಿದೆ. ಶ್ರೀ Narendra Modi ಅವರ ಸಮರ್ಥ ನಾಯಕತ್ವ ಭಾರತದ ಅಭಿವೃದ್ಧಿಯ ಪಥವನ್ನು ಬದಲಿಸಿತು. ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ಹಿರಿಯಣ್ಣನಾಗಿ ಜಗತ್ತನ್ನು ಮುನ್ನಡೆಸಲಿದ್ದು ನರೇಂದ್ರ ಮೋದಿಯವರನ್ನು ಆ ಮಹತ್ಕಾರ್ಯಕ್ಕಾಗಿ ನಾವು ಮತ್ತೊಮ್ಮ ಈ ರಾಷ್ಟ್ರದ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ನಾವೆಲ್ಲರೂ ಬಿಜೆಪಿಯ ವಿಜಯಕ್ಕೆ ಶ್ರಮಿಸಬೇಕಿದೆ.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಪ್ರಮುಖರಾದ ಶ್ರೀ ರಘುನಾಥ ನಾರಾಯಣದಾಸ, ಶ್ರೀ ಮೋಹನ ಗೋಲಿ, ಶ್ರೀ ಬುಚ್ಚಣ್ಣ ಮುಷ್ಟಿಪಲ್ಲೆ, ಶ್ರೀ ಮಂಜು ಬಿಜವಾಡ, ಶ್ರೀ ಕೃಷ್ಣ ಗಣಗಾಳಕರ, ಶ್ರೀ ಮಾಸಣ್ಣ ಅಮರಜಿಂತಾ, ಪಕ್ಷದ ಪ್ರಮುಖರಾದ ಶ್ರೀ ಸಂಜಯ್ ಕಪಟ್ಕರ್, ಶ್ರೀ ಕೃಷ್ಣ ಉಪ್ಪೇರ್ ಹಾಗೂ ಸವಿತಾ ಸಮಾಜದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.