Tel: +91 0836 2251055
21 APRIL 2024
“ಹುಬ್ಬಳ್ಳಿಯಲ್ಲಿ ಮೊಳಗಿದ ಬಿಜೆಪಿ ಚುನಾವಣಾ ಶಂಖನಾದ”
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ J.P.Nadda ಅವರ ಉಪಸ್ಥಿತಿಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ಇಂದು ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ದೇಶ ಎಷ್ಟು ಬದಲಾಗಿದೆಯೆಂದರೆ, ಮೋದಿಯವರ ಗ್ಯಾರಂಟಿ ಎಂದರೆ ಅದು ಪೂರೈಕೆಯಾಗುವ ಗ್ಯಾರಂಟಿ. ಬಿಜೆಪಿ ಪಕ್ಷದ ರಾಜಕಾರಣ ಅಂದರೆ ಅಭಿವೃದ್ಧಿ, ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಮಾಡಿ ತೋರಿಸುವುದು. ಮುಂಚೆ ದೇಶದಲ್ಲಿ ಪರಿವಾರವಾದ ಇತ್ತು. ಆದರೆ ಈಗ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎಂದು ಹಿಂದುಳಿದ ಎಲ್ಲಾ ವರ್ಗಗಳ ಪರವಾಗಿ ಶ್ರಮಿಸುವುದು ಎಂದಾಗಿದೆ. ಅದರಂತೆ ನಮ್ಮ ಪಕ್ಷ ಕಳೆದ 10 ವರ್ಷಗಳ ಕಾಲಾವಧಿಯಲ್ಲಿ ಸಾಧಿಸಿ ತೋರಿಸಿದೆ. ಇದು ಹೀಗೇ ಮುಂದುವರೆಯಬೇಕು. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸಬೇಕು ಎಂಬ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು.
ಇಂದಿನ ಸಭೆಯಲ್ಲಿ ಶಾಸಕರಾದ ಶ್ರೀ Arvind Bellad , ಶ್ರೀ Mahesh Tenginkai ,ಶ್ರೀ M R Patil , ವಿಧಾನ ಪರಿಷತ್ ಸದಸ್ಯರಾದ ಶ್ರೀ Pradeep Shettar , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಶ್ರೀ ನಿಂಗಪ್ಪ ಸುತಗಟ್ಟಿ, ಮಾಜಿ ಶಾಸಕರಾದ ಶ್ರೀ Shankar Patil Munenakoppa , ಶ್ರೀ Amrut Desai , ಶ್ರೀಮತಿ Seema Ashok Masuti , ಧಾರವಾಡ ಜಿಲ್ಲಾ ಚುನಾವಣಾ ಸಂಚಾಲಕರಾದ ಶ್ರೀ ಮ ನಾಗರಾಜ್, ಹು-ಧಾ ಮಹಾಪೌರರಾದ ಶ್ರೀಮತಿ ವೀಣಾ ಭರದ್ವಾಡ, ಶ್ರೀ Rajanna Koravi , ಶ್ರೀ ಬಸವರಾಜ ಕುಂದಗೋಳಮಠ, ಶ್ರೀ ಮಹೇಂದ್ರ ಕೌತಾಳ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.