2020-21 ರಲ್ಲಿ ಭಾರತ 133.5 ಲಕ್ಷ ಟನ್ ಖಾದ್ಯ ತೈಲ ಆಮದು ಮಾಡಿಕೊಂಡಿತ್ತು. ಅದರಲ್ಲಿ 56% ಪಾಲು ಪಾಮ್ ಎಣ್ಣೆಯದಾಗಿತ್ತು. ಖಾದ್ಯ ತೈಲಗಳ ಮೇಲಿನ ಆಮದು ಹೊರೆಯನ್ನು ಕಡಿಮೆ ಮಾಡಲು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಯೋಜನೆ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್. ಈ ಯೋಜನೆಯಡಿ ಎಣ್ಣೆ ಪಾಮ್ ಕೃಷಿಗಾಗಿ ಸರ್ಕಾರವು ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಮುಂದಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 25,000 ರೈತರು ಕೃಷಿ ಮತ್ತು ತೋಟಗಾರಿಕೆ ಅಡಿಯಲ್ಲಿ ಎಣ್ಣೆ ಕಾಳುಗಳನ್ನು ಉತ್ಪಾದಿಸಲು ರೂ. 8 ಕೋಟಿ ಪ್ರೋತ್ಸಾಹ ಧನ ಪಡೆದಿದ್ದಾರೆ.

#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: