6 APRIL 2024

“ಸಬ್ ಕಾ‌ ಸಾಥ್ ಸಬ್ ವಿಕಾಸ್”

ಭಾರತೀಯ ಜನತಾ ಪಕ್ಷ ಸಮಾಜದ ಸರ್ವರನ್ನೂ ಒಗ್ಗೂಡಿಸಿ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇಂದು ಹುಬ್ಬಳ್ಳಿಯ ಪಕ್ಷದ ಕಾರ್ಯಾಲಯದಲ್ಲಿ ಕುರುಹಿನಶೆಟ್ಟಿ ಸಮಾಜದ ಪ್ರಮುಖರೊಂದಿಗೆ ಸಭೆ ನಡೆಸಿ ಹಲವಾರು ವಿಚಾರಗಳ ಕುರಿತು ಚರ್ಚಿಸಲಾಯಿತು.

ಕುರುಹಿನಶೆಟ್ಟಿ ಸಮಾಜ ನಿರಂತರವಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಧರ್ಮ ಮತ್ತು ದೇಶದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಬಿಜೆಪಿಯನ್ನು ಬೆಂಬಲಿಸಿದೆ.

ದೇಶದ ಸರ್ವತೋಮುಖ ಪ್ರಗತಿಗೆ ಪ್ರಧಾನಮಂತ್ರಿ ಶ್ರೀ Narendra Modi ಅವರೇ ಮತ್ತೊಮ್ಮೆ ಗೆಲ್ಲಬೇಕೆಂಬ ಇಚ್ಚೆ ಹೊಂದಿರುವ ಎಲ್ಲರೂ, ಬಿಜೆಪಿಯ ಜೊತೆಗಿರುತ್ತೇವೆ ಎಂದು ಭರವಸೆ ನೀಡುವ ಮೂಲಕ ನಮಗೆ ಶಕ್ತಿ ತುಂಬಿದರು.

ಸಭೆಯಲ್ಲಿ ಪಕ್ಷದ ಪ್ರಮುಖರಾದ ಶ್ರೀ ಈರಣ್ಣ ಜಡಿ, ಸಮಾಜದ ಪ್ರಮುಖರಾದ ಶ್ರೀ ಎಂ.ಪಿ.ಶಿವಕುಮಾರ್, ಸಿದ್ದಪ್ಪ ಡಂಬಲ್, ಮಂಜುನಾಥ ಕಲಭಾವಿ, ಸಿ ಆರ್ ಶಿರಹಟ್ಟಿ, ಈರಣ್ಣ ಕೊಡಗಿ, ಶಂಕರ್ ಕಲಘಟಗಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: