23 March 2024

“ಸಂಘಟನ್ ಮೇ ಶಕ್ತಿ ಹೈ”

ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಐತಿಹಾಸಿಕ ಗೆಲುವು ಸಾಧಿಸುವುದು ಶತ ಸಿದ್ಧ ಎಂಬಂತೆ, ಇಂದು ಪಕ್ಷದ ಕಾರ್ಯಾಲಯದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಕಾರ್ಯಕರ್ತರೆಲ್ಲರೂ ಒಕ್ಕೊರಲಿನಿಂದ, ಮತ್ತೊಮ್ಮೆ ಕಮಲ ಅರಳಿಸಲು ಸಜ್ಜಾಗಿದ್ದೇವೆ ಎಂದು ಭರವಸೆ ನೀಡಿದರು.

ಪಕ್ಷ ಸಂಘಟನೆಯೊಂದಿಗೆ ಪ್ರತೀ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪದೊಂದಿಗೆ ಶ್ರಮಿಸುವ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ದೇಶದ ಬೆಳವಣಿಗೆಯ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಜೊತೆಗೂಡಿಸಿಕೊಂಡು ಪ್ರತೀ ಮನೆ ಮನೆಗೆ ತೆರಳಿ ಚುನಾವಣೆ ಪ್ರಚಾರ ಮಾಡಿ, ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದ ಕಾರ್ಯಕರ್ತರ ವಿಶ್ವಾಸದ ಮಾತುಗಳೇ ನಮಗೆ ಶ್ರೀರಕ್ಷೆ.

ಇಂದಿನ ಸಭೆಯಲ್ಲಿ ಶಾಸಕರಾದ ಶ್ರೀ M R Patil , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತ್ತಗಟ್ಟಿ, ಸಂಚಾಲಕರಾದ ಶ್ರೀ ಈರಣ್ಣ ಜಡಿ, ಚುನಾವಣಾ ಉಸ್ತುವಾರಿ ಶ್ರೀ ಶಶಿಮೌಳಿ ಕುಲಕರ್ಣಿ, ಮಂಡಲ‌ ಅಧ್ಯಕ್ಷರು ಉಪಾಧ್ಯಕ್ಷರು,‌ ಮಹಿಳಾ ಮೋರ್ಚಾದ ಪ್ರಮುಖರು ಉಪಸ್ಥಿತರಿದ್ದರು.

#ಬಿಜೆಪಿಮತ್ತೊಮ್ಮೆ

#DharwadMPConstituency

#PhirEkBaarModiSarkar

#AbkiBaar400Paar

Tags: