1 MAY 2024

“ಕಲಘಟಗಿಯಲ್ಲಿ ಕೇಸರಿ ಕಲರವ”

ಇಂದು ಕಲಘಟಗಿ ವಿಧಾನಸಭಾ ಕ್ಷೇತ್ರದ ಸೂಳಿಕಟ್ಟಿಯ ಗ್ರಾಮದೇವತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸಂಗಮೇಶ್ವರ ಮತ್ತು ಬೆಲವಂತರ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು. ಸ್ವಚ್ಛ ಭಾರತವೇ ಸ್ವಸ್ಥ ಭಾರತಕ್ಕೆ ಹಾದಿ ಎಂದು ನಂಬಿರುವ ಪ್ರಧಾನಮಂತ್ರಿ ಶ್ರೀ Narendra Modi ಅವರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸರಿ ಸುಮಾರು 1.5 ಲಕ್ಷದಷ್ಟು ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚಕ್ಕೆ ಮುಕ್ತಿ ಕೊಡಲಾಗಿದೆ. ಇಂಥ ಯೋಜನೆಗಳಿಂದ ಜನತೆಗೆ ಗೌರವದ ಜೀವನ ಕಲ್ಪಿಸುತ್ತಿರುವ ಮೋದಿಯವರು ಮತ್ತು ಬಿಜೆಪಿ ನಮ್ಮ ಆಯ್ಕೆ. ಬಿಜೆಪಿಗೆ ತಮ್ಮ ಮತ ಎಂದು ಜನರು ಶಪಥ ಮಾಡಿದರು.

ಇಂದಿನ ಸಭೆಗಳಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಪ್ರಮುಖರಾದ ಶ್ರೀ ಐಸಿ ಗೋಕುಲ‌, ಶ್ರೀ ಸದಾನಂದ ಚಿಂತಾಮಣಿ, ಶ್ರೀ ಮಲ್ಲಯ್ಯ ಸ್ವಾಮಿ ಗೋಡಿಮನೆ, ಶ್ರೀ ಸಿ.ಎಫ್.ಪಾಟೀಲ್, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: